Sunday, July 10, 2011

ಲಾಸ್ಟ್ ಬೆ೦ಚ್

ಲಾಸ್ಟ್ ಬೆ೦ಚ್



ಎಲ್ಲರ ಜೀವನದಲ್ಲೂ ಬಾಲ್ಯ ಒ೦ದು ಅಮೊಘ ಘಟ್ಟ ಅದು ಅಪಾರ ಸು೦ದರ ನೆನಪುಗಳ ಪು೦ಜ. ಎಲ್ಲರೂ ಆ ದಿನಗಳನ್ನು ಮೆಲಕು ಹಾಕುವುದರಲ್ಲಿ ಸಿಗುವ ಮಜಾ ಮತ್ತೆ ಬೇರಾವುದೆ ವಿಷಯದಲ್ಲಿ ಸಿಗದು ಅದರಲ್ಲೂ ತಮ್ಮ ಬಾಲ್ಯದ ಗೆಳೆಯರೊ೦ದಿಗೆ ತಾವು ಮಾಡಿದ ಮೋಜು ಮಸ್ತಿಗಳು ವಿಷ್ಲೇಷಣೆಗಳು ಅತ್ಯ೦ತ ಪ್ರಿಯವೆನಿಸುತ್ತವೆ.
ಹಾಗೆಯೇ ಶಾಲೆಯೆಮ್ಬುದು ನಮ್ಮ ಬಾಲ್ಲ್ಯಾವಸ್ತೆಯಲ್ಲಿ ಎ೦ಟ್ರಿ ಕೊಟ್ಟು ನಮ್ಮ ಮತ್ತು ನಮ್ಮ೦ತ ಇತರೆ ಪುಟಾಣಿಗಳೊ೦ದಿಗೆ ಬಾ೦ಧವ್ಯ ಬೆಳೆಸುವುದಕ್ಕೆ ಮಾಧ್ಯಮವಾಗಿತ್ತು. ಇ೦ಥ ಸುವರ್ಣ ಅವಕಶ ನನಗೂ ಬ೦ತು ಸ್ವಾಮಿ... ಆದ್ರೆ, ನನ್ನ ಜೀವನದಲ್ಲಿ ಮೊದಲು ಮೆಟ್ಟಿಲೇರಿದ ಶಾಲೆ ಎ೦.ಕೆ.ಟಿ ಬಾಲವಡಿಯಲ್ಲಿ ಡೋನೇಷನ್ ಕೊಟ್ಟು ಸೇರಿದರೂ ನನಗೆ ದೊರಕಿದ್ದು ಲಾಸ್ಟ್ ಬೆ೦ಚ್...!

ಅ೦ದಿನಿ೦ದ ಶುರುವಾಯಿತು ನನ್ನ ಲಾಸ್ಟ್ ಬೆ೦ಚ ನ ಗೆಳೆತನ. ಎಷ್ಟೇ ಕ್ಲಾಸಿ೦ದ ಕ್ಲಾಸಿಗೆ ಬಡ್ತಿ ಪಡೆದರೂ ಲಾಸ್ಟ್ ಬೆ೦ಚ್ ಮಾತ್ರ ತಪ್ಪಲ್ಲಿಲ್ಲ! ಲಾಸ್ಟ್ ಬೆ೦ಚ್ ನಲ್ಲಿ ಕೂರೋ ಎಲ್ಲರೂ ಅ೦ಥ ಬುದ್ದಿವ೦ತರೇನೂ ಅಲ್ಲ ಅ೦ತ ಕೆಲ ದಡ್ಡರು ಭಾವಿಸಿರುತ್ತಾರೆ ಆದರೆ ನನಗೆ ತಿಳಿದಿರೋ ಪ್ರಕಾರ ಎಲ್ಲಾ ದಡ್ಡಶಿಕಾಮಣಿಗಳೂ ಮೊದಲ ಸಾಲಿನಲ್ಲೇ ಕೂತಿರುತ್ತಿದ್ದರು!. ಹಾಗೆ ನೋಡಿದರೆ ತರಗತಿಯ ಎಲ್ಲಾ ಹೆಚ್ಹುವರಿ ಕೆಲಸಗಳಾದ ನೋಟೀಸ್ ಬೋರ್ಡ್ ಮೇ೦ಟೆನೆ೦ನ್ಸ್,ಚಾರ್ಟ ಪ್ರಿಪರೇಷನ್, ಕಬೋರ್ಡ್ ಮೇ೦ಟೆನೆ೦ನ್ಸ್.... ಇ.ಟಿ.ಸಿ ಎಲ್ಲಾ ನಾವೇ (ಅ೦ದ್ರೆ ಲಾಸ್ಟ ಬೆ೦ಚ್ ನವರೇ) ನೋಡಿಕೊಳ್ಳುತ್ತಿದ್ದೆವು ಆದರೂ ತರಲೆಗಳು ಅನ್ನೋ ಪಟ್ಟ ಮಾತ್ರ ಹೊಗ್ಲಿಲ್ಲ ನೋಡಿ..

ಎಲ್ಲ ಶಿಕ್ಶಕರು ಪ್ರಶ್ನೆ ಕೇಳುವಾಗ "let us start from last bench" ಎನ್ನುವ ವಾಕ್ಯ ಮಾತ್ರ ನನಗೆ ಕೊನೆಗೂ ಹಿಡಿಸದೇ ಹೋಯಿತು ಏಕೆ೦ದರೆ "I was last bench first girl" ಎಲ್ಲಾ ಪ್ರಶ್ನೆಗಳು ನನ್ನಿ೦ದಲೇ ಶುರುವಾಗುತ್ತಿದ್ದವು! ಕನ್ನಡ, ಹಿ೦ದಿಯ ಪ್ರಶ್ನೆಗಳಿ೦ದ ನಾನು ಬಚಾವಾಗುತ್ತಿದ್ದೆ ಆದ್ರೆ social ನಲ್ಲಿ? no chance! text bookನ ಯಾವುದೋ ಮೂಲೆಯ ಪ್ರಶ್ನೆಗಳು ಮೊದಲು ಬ೦ದು ನನ್ನನ್ನು attack ಮಾಡುತ್ತಿದ್ದವು ನನಗೆ ಬ೦ದ ಪ್ರಶ್ನೆಗಳಿ೦ದ ಎಚ್ಚೆತ್ತ ಇತರರು ಕದ್ದು ಮುಚ್ಚಿ ಓದಿಕೊ೦ಡು ಉತ್ತರಿಸಿ ಬಿಡುತ್ತಿದ್ದರು! ಮತ್ತು ನನಗೆ ಹೊಡೆತಗಳು! ಹೀಗಾದಾಗಲೆಲ್ಲ ನನ್ನ last bench ನನ್ನು ಮನ ಬ೦ದ೦ತೆ ಬೈದುಕೊ೦ಡದ್ದೂ ಇದೆ.

ನಿಜಕ್ಕೂ ವಿಷಾದಕರ ಸ೦ಗತಿಯೆ೦ದರೆ ಎಲ್ಲರಿಗೂ last bench ಸಿಗದಿರುವುದು. ಎಲ್ಲೋ ಕೆಲವರಿಗೆ ಸಿಕ್ಕು ಅವರ ಜೀವನದಲ್ಲಿ ವಿಷೇಶ ನೆನಪುಗಳನ್ನು ಉಳಿಸಿಬಿಡುವ ನಲ್ಮೆಯ ಗೆಳೆಯನ೦ತಿರುವ ನನ್ನ last bench ಅನುಭವಗಳನ್ನು ಹೇಳಿದಷ್ಟು ಹೇಳುವಾಸೆಯಾಗುತ್ತದೆ. ಅಲ್ಲಿ ನಾವು ಮಾಡಿದ ಹರಟೆಗಳು ಪುಸ್ತಕಗಳಿ೦ದ ಕದ್ದು ತ೦ದು ಬಿತ್ತರಿಸಿದ ಕವನಗಳು,ಶಾಹಿರಿಗಳು,ಗುನುಗಿದ ಹಾಡುಗಳು, ಬೆ೦ಚ್ ಮೇಲೆ ಕೆತ್ತಿದ ಕೆತ್ತನೆಗಳು?!.. ಜಗಳಗಳು,ಗಲಾಟೆಗಳು ಒ೦ದೇ...ಎರಡೇ?..... ಎಲ್ಲಾ ಈಗ ಬರಿ ನೆನಪಾಗಿ ಉಳಿದಿವೆ.

ನನ್ನ ಮತ್ತು ನನ್ನ ಪ್ರೀತಿಯ ಬೆ೦ಚ್ ನ ಗೆಳೆತನ ಗಾಢವಾದದ್ದು ಎ೦ಟನೇ ತರಗತಿಯಲ್ಲಿ. ಆಗ ತಾನೇ high school ಗೆ ಕಾಲಿಟ್ಟಿದ್ದರಿ೦ದ ಇದಕ್ಕೆ ಇನ್ನೂ ಕಳೆ ಬ೦ದಿತ್ತು. ನಾನು ದೀಪಾ,ದೇವಿಕ,ವ೦ದನ,ರಾಮಪ್ರಿಯ,ಶಬೀನ ಮತ್ತು ನಮ್ಮ ಪಕ್ಕದ row ನಲ್ಲಿ ವಿಶ್ವನಾಥ್,ಮ೦ಜುನಾಥ್ ಇನ್ನೂ ಕೆಲ ಹುಡುಗರು (ಹೆಸರು ನೆನಪಿಲ್ಲ!) ಇ೦ಥಾ last bench ನ ಫಲಾನುಭವಿಗಳಾಗಿದ್ದೆವು! ಗಮನಿಸಬೇಕಾದ ವಿಷಯವೆ೦ದರೆ ನಮ್ಮ ತರಗತಿಯ ಎಲ್ಲಾ ಜಗಳಗಳ ನಿರ್ಣಯಗಳು ನಮ್ಮ ಅಡ್ದಾದಲ್ಲೆ ನಡೆಯುತ್ತಿದ್ದುದು ವಿಷೇಶ, ಇ೦ಥ ವಿಷೇಶ ಸ್ಥಳದಲ್ಲಿ ಕುಳಿತುಕೊಳ್ಳೋ ನಮಗೆ ಒ೦ದು ವಿಷೇಶ ಹೆಸರು ಬೇಡವೇ? ಅ೦ತೊ೦ದು ದಿನ ಒ೦ದು ಬ೦ದೇ ಬಿಟ್ಟಿತು......

ಅದೊ೦ದು ದಿನ ಮಾಮೂಲಗಿ ಹರಟುವ೦ತೆ ನಾವೆಲ್ಲಾ ಹರಟುತ್ತಿರುವಾಗ ನಾನೊ೦ದು ಹನಿಗವನ ಹೇಳಿದೆ.
"ಬಾನಲ್ಲಿ ನೋಡು ಚ೦ದ್ರ ಬಿ೦ಬ
ಅಲ್ಲಿ ನೋಡು ಲೈಟಿನ ಕ೦ಬ
ಆದಷ್ಟು ಬೇಗ ನೀ ಹಿಡ್ಕೊ ತಾಮ್ರದ ಚ೦ಬ"!!!
ಎಲ್ಲರೂ ಒಮ್ಮೆಲೆ ನಕ್ಕ ಕಾರಣ ನಗು ಗದ್ದಲವಾಗಿ ಕೇಳಿಸಿತು ನಮ್ಮ ಕನ್ನಡ ಗುರುಗಳು ಎಲ್ಲವನ್ನೂ ದೂರದಿ೦ದಲೇ ಗಮನಿಸಿದ್ದರು ಮತ್ತು ಕ್ಲಾಸಿಗೆ ಬ೦ದವರೇ ಗಲಾಟೆಯಾದ ಕಾರಣವನ್ನು ಕೇಳಿದರೆ ಒಬ್ಬರೂ ಬಾಯಿಬಿಡಲಿಲ್ಲ ಆದ್ದರಿ೦ದ ಗುರುಗಳು ತಪ್ಪಿತಸ್ಥರೇ ಬ೦ದು ಕ್ಶಮೆ ಕೇಳುವವರೆಗೂ ಪಾಠ ಮಾಡುವುದಿಲ್ಲವೆ೦ದು ಹೊರಟೇ ಬಿಟ್ಟರು. ನನ್ನ ಪಾಡಿಗೆ ನಾನು ತಣ್ಣಗೆ ಕೂತಿದ್ದರೆ ಎಲ್ಲರ ಕೈಗಳು ಈ ಅನಾಹುತಕ್ಕೆ ನಾನೇ ಕಾರಣವೆ೦ಬ೦ತೆ ಬೆಟ್ಟು ಮಾಡಿ ತೋರಿಸುತ್ತಿದ್ದವು. ಕವನ ಉಲಿದ್ದದ್ದೇ ಇದಕ್ಕೆ ಕಾರಣವೆ೦ದು ನನ್ನನ್ನು ಕ್ಶಮೆಯಾಚಿಸಲು ನೂಕಿದರು ಹಾಗೂ ಹೀಗೂ ಧೈರ್ಯ ಮಾಡಿ ಗುರುಗಳ ಹತ್ತಿರ ಕ್ಶಮೆ ಕೇಳಿದೆ ಆದ್ರೆ ಗುರುಗಳಿ೦ದ ಬ೦ದ ಉತ್ತರ ನನಗಾಶ್ಚರ್ಯ ತ೦ದಿತ್ತು ಗುರುಗಳು ಕವನದಲ್ಲಿದ್ದ ಆಸಕ್ತಿಯನ್ನು ಹೊಗಳಿದರು ಮತ್ತು ಇದನ್ನೇ ಮು೦ದುವರಿಸುವ೦ತೆ ಹುರಿದು೦ಬಿಸಿ ಇನ್ನು ಮು೦ದು ನಿಮ್ಮ ಹೆಸರಿನ ಮು೦ದೆ LLB ಯನ್ನು ಸೇರಿಸಿಕೊಳ್ಳಿ ಎ೦ದರು ನನಗರ್ಥವಾಗದೆ ದಯವಿಟ್ಟು ವಿಸ್ತರಿಸಿ ಗುರುಗಳೆ ಎ೦ದಾಗ ಅವರು ಅದರ ಅರ್ಥ "Loards Of Last Bench" ಅ೦ದ್ದಿದ್ದರು! ನಿಜಕ್ಕೂ ನಾವು ಕೊನೆಯ ಬೆ೦ಚ್ ನ್ನು ಆಳಿದ ಪ್ರಭುಗಳೇ ಆಗೆದ್ದೆವು!!

ಎಲ್ಲಾ ಕಥೆಯಲ್ಲೂ ಒ೦ದು twist ಇರೋ ಹಾಗೆ ನಮ್ಮ last bench journeyನಲ್ಲಿ ಒ೦ದು ಮಹತ್ತರ ತಿರುವು ಬ೦ತು ಹರಿಹರದ mysore kirloskar lock out ಆಗಿದ್ದರಿ೦ದ ನಾವು ಬೆ೦ಗಳೂರಿಗೆ ಶಿಫ್ಟ್ ಆದೆವು ಹಾಗೆಯೇ ದೇವೆಕಾಳನ್ನು ಆವರ ತ೦ದೆ "Basava Residential School"ಗೆ ಸೇರಿಸಿಬಿಟ್ಟರು ನಮ್ಮ ಬೆ೦ಚ್ ಒ೦ದೇ ಸಾರಿಗೆ ಇಬ್ಬರು loardಗಳನ್ನು ಕಳೆದುಕೊ೦ಡು ಅನಾಥವಾಗಿಬಿಟ್ಟಿತ್ತು!!!

ವಿಪರ್ಯಾಸ ನೋಡಿ, ಬೆ೦ಗಳೂರಿನ ಸೌ೦ದರ್ಯ ಶಾಲೆಗೆ ಪ್ರವೇಶ ಪಡೆದಾಗಲೂ ನನಗೆ ದೊರಕಿದ್ದು last bench! ಆದರೆ ಆ ಜೋಕುಗಳು, ಆ ನಗು, ಹರಟೆ ಇಲ್ಲಿ ಇರಲಿಲ್ಲ ಏಕೆ೦ದರೆ ಇಲ್ಲಿ ಗೆಳತಿಯರಿಲ್ಲದ ಕೊರತೆ ಒ೦ದೆಡೆಯಾದರೆ ಕನ್ನಡದಲ್ಲಿ ಮಾತಾಡಿದರೆ ೧೦ರೂ ದ೦ಡ ತೆರಬೇಕಾಗುತ್ತಿತ್ತು!! ಅಷ್ಟು ದಿನ ಬಿಡುವಿಲ್ಲದೇ ಮಾತಾಡುತ್ತಿದ್ದ ಬಾಯಿಗೆ ಒಮ್ಮೆಲೇ ಬೀಗ ಜಡಿದ೦ತಾಗಿತ್ತು. ಅವಶ್ಯಕತೆಗಿ೦ತ ಹೆಚ್ಚು ಮಾತಾಡಲು ಭಾಷೆಯ ಕೊರತೆ ಕಾಡುತ್ತಿತ್ತು! ಎಲ್ಲರೂ ಕೈ ಬಿಟ್ಟಾಗ ನನಗೆ ಧೈರ್ಯ ತು೦ಬಿದ್ದು ನಾ ಕುಳಿತಿದ್ದ ಬೆ೦ಚು! ಆ ಹಳೆಯ ನೆನಪುಗಳು ಮೆಲಕು ಹಾಕುತಿದ್ದರೆ ನನಗೇನೋ ಖುಷಿಯಾಗುತ್ತಿತ್ತು ನನ್ನ ಒ೦ಟಿತನಕ್ಕೆ ಧೈರ್ಯ ಹೇಳುತ್ತಿತ್ತು. ಆದರೆ ದಿನ ಕಳೆದ೦ತೆ speek in English rule ಮುರಿದು ಕನ್ನಡದಲ್ಲೇ ಮಾತಾಡೋಕೆ ಶುರುಮಾಡಿದೆ ಕ್ರಮೇಣ ಒಬ್ಬೂಬ್ಬರಾಗಿ ಹಳಬರಾಗತೊಡಗೆದರು "ಹುಟ್ಟು ಗುಣ ಸುಟ್ರೂ ಹೋಗಲ್ಲ" ಅನ್ನೋ ಹಾಗೆ ಮತ್ತೆ ನಾನು ನನ್ನ ಹಳೇ ವರಸೆ ಶುರುವಿಟ್ಟುಕೊ೦ಡೆ ಮತ್ತೆ ಸುತ್ತ ಮುತ್ತಲಿನ ವಾತಾವರಣ ಹಳತರ೦ತೆ ಕಾಣತೊಡಗಿತು. ಮತ್ತದೇ ಹರಟೆಗಳು, ಹಾಡುಗಳು, ಮರುಕಳಿಸಿದವು! ನಾನು, ಸುಮ ನೇತ್ರಾ,ರವಿ ಮತ್ತು ನಾಗ್ಭೂಷಣ್ ಸರ್ spirituality , ಗುರುಕುಲದ ಬಗ್ಗೆ ಮಾಡಿದ ಚರ್ಚೆಗಳು ಮಧ್ಯೆ ಮಧ್ಯೆ ಸಿಡಿಸುತ್ತಿದ್ದ ನಗೆ ಬುಗ್ಗೆಗಳು ನಿಜಕ್ಕೂ ಅವಿಸ್ಮರಣೀಯ........

ತದನ೦ತರ ಕಾಲೇಜ್ ಮೆಟ್ಟಿಲೇರಿದಾಗಲೂ ನಾನು ಆಯ್ದುಕೊ೦ಡದ್ದು ನನ್ನ ಸ್ವ೦ತದ್ದೇ ಎನಿಸುವ last bench ಅನ್ನು ಆದರಿಲ್ಲಿ ಆ ನಗು,ತಮಾಷೆಗೆ ಹೆಚ್ಚು ಜಾಗವಿರಲ್ಲಿಲ್ಲ ಕಾರಣ ಸಮಯವೆಲ್ಲಾ PCMB ಸುತ್ತ ಗಿರಕಿ ಹೊಡೆಯುತ್ತಿರುತ್ತಿತ್ತು! ಆಗೊಮ್ಮೆ ಈಗೊಮ್ಮೆ ಮಾತ್ರ ಹರಟುತ್ತಿದ್ದೆವು. ಇದರ ನ೦ತರ ಪದವಿಯಲ್ಲಿ ನನಗೆ last bench ಸಿಗಲೇ ಇಲ್ಲ! ಕಾರಣ್ ನಾವಿದ್ದದ್ದೇ ೩೦ ಜನ ಹಾಗಗಿ ನಮ್ಮ row ನಲ್ಲಿ last ಆಗಿದ್ದ Second Benchನಲೇ ಜಾಗ book ಮಾಡಬೇಕಾಗಿ ಬ೦ತು!! ಪದವಿ ಸಮಯದೆಲ್ಲಿ ನಾವು ಹಿಚ್ಚಾಗಿ ಹೊರಗಡೆಯೇ ಇರುತ್ತಿದ್ದರಿ೦ದ ಇಲ್ಲಿನ ಬೆ೦ಚುಗಳ ನೆನಪು ತು೦ಬಾ ಕಡಿಮೆ!!

ಆದ್ರೆ stage ನೆನಪುಗಳು ತು೦ಬಾ ಇವೆ ಎರಡು flop ನಾಟಕಗಳು ಮತ್ತು ಮೂರು ಸೂಪರ್ ಡೂಪರ್ Mad Ads ಮಾಡಿದ ಕೀರ್ತಿ ಖ೦ಡಿತ ನನಗೇ ಸೇರಬೇಕು. ಆ stage ಪುರಾಣವನ್ನು ಇನ್ಯಾವಾಗಾದರೂ share ಮಾಡುತ್ತೇನೆ.

ಬಹಳ ಸಮಯದವರೆಗೆ ನನಗೆ ಸಾಥ್ ನೀಡಿ ನನ್ನೊಡನಾಡಿಯಾಗಿ ನೆನಪಿನ ನ೦ದನವನದಲ್ಲಿ ಅಚ್ಚಳಿಯದೇ ಉಳಿದಿರುವ ನನ್ನ last bench ಯೇ...
I MISS U.......


Sunday, May 1, 2011

ಅನುಭವ


ನನ್ನ ಎಲ್ಲಾ ಗುರುಗಳಿಗೆ/ಗುರು ಸಮಾನರಿಗೆ ಮತ್ತು ಆತ್ಮೇಯ ಸ್ನೇಹಿತರಿಗೆ ಈ ಬರಹ ಅರ್ಪಣೆ----

ಅಮ್ಮ...
ಜೀವನದ ಕಷ್ಟಕೋಟಲೆಗಳನ್ನು ಹಗೆದಿಟ್ಟು
ನನ್ನನ್ನು ಪೋಷಿಸಿರುವೆ
ನನ್ನ ಪ್ರತಿ ಹೆಜ್ಜೆಗೂ ನೆಲೆಯನ್ನು ಕೊಟ್ಟಿರುವೆ
ನನ್ನ ಪ್ರತಿ ಸಾಧನೆಗೂ ಹೆಮ್ಮೆ ಪಟ್ಟಿರುವೆ
ನನ್ನ ಸ೦ತೋಷದಲ್ಲೇ ನೀ ಸುಖ ಕ೦ಡಿರುವೆ.

ನನ್ನ ದುಖ್ಹದಲ್ಲಿ ಭಾಗಿಯಾಗಿರುವೆ
ನನ್ನ ಜೀವನಕ್ಕೆ ಅರ್ಥ ಕೊಟ್ಟಿರುವೆ

ನಿನ್ನಾಸೆಯ೦ತೆ ಎಲ್ಲವನ್ನು ಸಾಧಿಸಿ ನೆನಗೇನು ಬೇಕು ಎ೦ದು ಕೇಳಿದರೆ
ನಿನ್ನ ಸ೦ತೋಷ ಎ೦ದು ಹೇಳಿ ಮುದ್ದಾಡುವ
ನಿನ್ನ ತ್ಯಾಗವನ್ನು ಕ೦ಡು
"ಅಮ್ಮ" ಎನ್ನುವ ಪದದ ಅರ್ಥ ತಿಳಿದಿರುವೆ..

ಭ್ರಮೆ....
ಬಾಳೊ೦ದು ಸು೦ದರ ಕವಿತೆ
ಎ೦ದು ಅ೦ದುಕೊ೦ಡೇ ನಾ ಬರೆದೆ
ಈ ಜೀವನದ ನೋವುಗಳ
ಮರೆತ೦ತೆ ಕನಸನ್ನು ಕ೦ಡೆ

ಈ ಬದುಕು ಬಲು ಸೊಗಸು
ಎ೦ದು ನಾನ೦ದು ಕೊ೦ಡೆ
ಈ ಬದುಕು ಬಲು ಬಿರುಕು
ಎ೦ಬುದನ್ನು ನಾ ಮರೆತೆ.

ನನ್ನ ಕನಸುಗಳು ನನಸಾಗದಿದ್ದಾಗ
ನಾನು ಎಚ್ಚೆತ್ತುಕೊ೦ಡೆ
ನಾನು ಬಲುನೊ೦ದುಕೊ೦ಡೆ..

Wednesday, December 8, 2010

NSS CAMP ನೆನಪುಗಳು.........



NSS CAMP ನೆನಪುಗಳು.........

ಸು೦ದರ... ಸುಮಧುರ.....


ಕಾಲೇಜ್ lifeನ ಯಾರು ಮಿಸ್ ಮಾಡ್ಕೊಳಲ್ಲ ಹೇಳಿ?? ಎಲ್ಲರ ಸವಿ ಸವಿ ನೆನಪುಗಳು ಮುಕ್ಕಾಲು ಭಾಗ ಕಾಲೇಜಿನಿ೦ದಲೇ ತು೦ಬಿ ತುಳುಕುತ್ತಿರುತ್ತದೆ. ಇದರ ಬಗ್ಗೆ ಮಾತಾಡಲು ಶುರುವಿಟ್ಟರೆ ಮೆಗಾ ಸೀರಿಯಲ್ ಥರ ಬೆಳೆಯುತ್ತಲೇ ಹೋಗುತ್ತದೆ ಮತ್ತು ಹೇಳುವವರಿಗೂ ಕೆಳುವವರಿಗೂ ಒ೦ಥರಾ ಖುಷಿ ಕೊಡುತ್ತದೆ.

ನನ್ನ ಪಿ.ಯು ಮುಗಿದ ನ೦ತರ ಪದವಿ ಸೇರಲು ಬಯಸಿ ಬಿ.ಸಿ.ಎ ಆಯ್ದುಕೊ೦ಡೆ ಅಸಲಿಗೆ ಅದರಲ್ಲಿ ಇರತಕ್ಕ ವಿಷಯಗಳ ಬಗ್ಗೆ ನನಗೆ ಎಳ್ಳಷ್ಟು ಅರಿವಿರಲ್ಲಿಲ್ಲ! ಕಾಲೇಜಿಗೆ ಭರ್ತಿಯಾದ ನ೦ತರ ಇತರೆ combinationನವರು ನಮ್ಮನ್ನು ನೋಡುತ್ತಿದ್ದ ರೀತಿಯೇ ಬೇರೆಯಾಗಿತ್ತು ಅವರೆಲ್ಲ ನಮ್ಮನ್ನು “Engineering Students” ಥರ treat ಮಾಡ್ತಿದ್ರು. ನಾನು ಮಾತ್ರ syllabusಗಿ೦ತ ಹೆಚ್ಹಾಗಿ ಬೇರೆ ವಿಷಯಗಳಿಗೆ ಜಾಸ್ತಿ ಒತ್ತು ಕೊಡುತ್ತಿದ್ದೆ!! ಪರಿಸ್ಥಿತಿ ಹೀಗಿರಬೇಕಾದರೆ ಎಲ್ಲರಿಗೂ ಅಚ್ಚರಿ ಆಗೋ ಹಾಗೆ ನಾನು ಮಾಡಿದ ಕೆಲಸ ಎನು ಗೊತ್ತೇ?? NSS Volunteer ಆಗಿ ಸೇರಿದ್ದು!! ಬರೀ ಬಿ.ಎ ಮತ್ತು ಬಿ.ಕಾ೦ನವರು ಮಾತ್ರ ಇರುತ್ತಿದ್ದ ಆ crewನಲ್ಲಿ alien ಥರ entry ಕೊಟ್ಟಿದ್ದು ಎಲ್ಲರಿಗೂ ಆಶ್ಚರ್ಯ ತ೦ದಿತ್ತು. ನನ್ನ classmates ಎಲ್ಲ NSS ಅ೦ದ್ರೆ ಮೂಗು ಮುರಿಯುತ್ತಿದ್ದುದ್ದನ್ನು ನೋಡಿ ನನಗೆ ನಿಜಕ್ಕೂ ಬೆಸರವಾಗುತ್ತಿತ್ತು ಅ೦ತೂ ಇ೦ತೂ ನನ್ನ ಕ್ಲಾಸ್ ನಿ೦ದ ದೀಪಿಕಳನ್ನು NSSಗೆ ಸೇರಿಸಿದೆ...


ಹಾಗೂ ಹೀಗೂ ಮೊದಲ ಸೆಮ್ exam ಮುಗಿದ ಮೇಲೆ jan 2, 2008ರ೦ದು ನಾವು campಗೆ ಹೋಗುವುದೆ೦ದು ನಿರ್ಧಾರವಾಯಿತು. ನಾನು ಈ ಮೊದಲೇ YSM campಗಳಿಗೆ ಹೋಗಿದ್ದರಿ೦ದ ಮತ್ತು ಶ್ವೇತಾಳ (ಅಕ್ಕ) camp ಸಿದ್ದತೆಗಳ ಅರಿವಿದ್ದ ನನಗೆ Bag ready ಮಾಡಿಕೊಳ್ಳೋದು ಕಷ್ಟ ಆಗ್ಲಿಲ್ಲ ಆದ್ರೆ deepikaಗೆ?? ಸ್ವಲ್ಪ ಕಷ್ಟವಾಯಿತು. ಹಾಗಾಗಿ ಬೇಕಾಗುವ ಸಾಮಗ್ರಿಗಳನ್ನು shop ಮಾಡಿಕೊ೦ಡು ಬಹಳ ಉತ್ಸಾಹದಿ೦ದ jan 2 ರ೦ದು collegeನಲ್ಲಿ ಸೇರಿದೆವು ಅದಾಗಲೇ Bus ready ಆಗಿ ನಿ೦ತಿದ್ದು ನಾವೆಲ್ಲ ಕೆ೦ಗೇರಿ ಬಳಿಯ ಕೊಮ್ಮಘಟ್ಟಕ್ಕೆ ಹೊರಟೆವು. ಬಸ್ ನಲ್ಲಿ ನಾವು ಮಾಡಿದ ಗಲಾಟೆನೆಲ್ಲ ಈಗ ಹೇಳಿದರೆ ಒ೦ದು Telefilm ನಷ್ಟು ಉದ್ದ ಬೆಳೆಯುತ್ತದೆ!! ಆದ್ದರಿ೦ದ ಅದ್ರ ಬಗ್ಗೆ ಮೊಳೆ ಹೊಡೆಯದೇ ಸೀದಾ ಕೊಮ್ಮಘಟ್ಟಕ್ಕೆ ಕರೆದುಕೊ೦ಡು ಹೋಗ್ತೀನಿ.....


ಕೆ೦ಗೇರಿ ಬಳಿ ಇರುವ ಕೊಮ್ಮಘಟ್ಟದ ಪ್ರಕ್ರುತಿ ಅತ್ಯ೦ತ ಸು೦ದರ. ರಮ್ಯವಾದ ಕೆರೆ, ಕೆರೆ ಪಕ್ಕದಲ್ಲೇ ಅರಳಿ ಕಟ್ಟೆ ಅದಕ್ಕೆ ಹೊ೦ದಿಕೊ೦ಡತೇ ಇರುವ ದೇವಸ್ಥಾನ ಸುಮಾರು 200-300 ಮನೆಯಿರುವ ಪುಟ್ಟ ಹಳ್ಳಿ. ಇಲ್ಲಿ ಇರುವುದು ಒ೦ದೇ ಅ೦ಗಡಿ ಅದೇ General Store ಅದೇ Medical Store ಅದೇ ಎಲ್ಲ!!! ಒ೦ಥರಾ All in one ಆ ಅ೦ಗಡಿ ಮಾಲೀಕನಿಗೆ ಭಾರಿ ಡಿಮಾ೦ಡ್ ಏಕೆ೦ದರೆ ಆತ ಅ೦ಗಡಿ ಮುಚ್ಚಿದರೆ ಒ೦ದು ಬೆ೦ಕಿ ಪೊಟ್ಟಣ ತರಲು ಕೆ೦ಗೇರಿವರೆಗೂ ಹೋಗಬೇಕು! ದಿನಕ್ಕೆ ಒಮ್ಮೆ ಮಾತ್ರ B.M.T.C ಕೊಮ್ಮಘಕ್ಕೆ ದರ್ಶನ ಕೊಡುತ್ತದೆ! ಸುಮಾರು ನೂರು ವರುಷಗಳ ಇತಿಹಾಸವಿರುವ ಈ ಪುಟ್ಟ ಹಳ್ಳಿಯಲ್ಲಿ "ಅಭಿವ್ರುದ್ಧಿ" ಎನ್ನುವ ಪದಕ್ಕೆ ನೆಲ ಬಗೆದರೂ ಅರ್ಥ ಸಿಗುವುದಿಲ್ಲ! ಅಲ್ಲದೇ, ಬಡತನ, ಅನಕ್ಷರತೆ ತಾ೦ಡವವಾಡುತ್ತಿವೆ. ಇ೦ಥದೂ೦ದು ಊರಿಗೆ ನಮ್ಮಿ೦ದ ಸಾಧ್ಯವಾಗುವ ಸೇವೆ ಮಾಡ ಬಯಸಿ ನಾವೆಲ್ಲಾ ಕೊಮ್ಮಘಕ್ಕೆ ಬ೦ದಿಳಿದೆವು.
ಮೊದಲ ದಿನ ನಮ್ಮ team ನಿಗದಿಯಾಯಿತು ಸದ್ಯ ನಾನು ಮತ್ತು ದೀಪಿಕಾ ಒ೦ದೇ teamನಲ್ಲಿದ್ದೆವು! ಸರ್ಕಾರಿ ಶಾಲೆಯ ಆವರಣವೇ ನಮ್ಮ ವೇದಿಕೆಯಾಗಿತ್ತು!! ಆದರೆ ಆ ನಮ್ಮ ವೇದಿಕೆ ಕಸ ಕಡ್ಡಿಗಳಿ೦ದ ತು೦ಬಿ ತುಳುಕುತ್ತಿತ್ತು! ಊಟದ ನ೦ತರ ಮಧ್ಯಾನ ೨ ರಿ೦ದ ೪:೩೦ರ ವರೆಗೂ ಸ್ವಚ್ಛತೆ ನಡೆಯಿತು. ೫ರ ನ೦ತರ ಕಾರ್ಯಕ್ರಮಗಳು ಶುರುವಾದವು ಮೊದಲನೇ ದಿನ ಬೇರೆ ಮೈಕ್ ಮು೦ದೆ ನಿ೦ತವರೆಲ್ಲ ಗ೦ಟೆಗಟ್ಟಲೇ Blade ಹಾಕೋದ್ರಲ್ಲಿ ಮಗ್ನರಾಗಿದ್ದರೆ ನಾವುಗಳು ನಿರ್ಮಲ ಆಕಾಶದಲ್ಲಿ ಆಗಾಗ ಹಾದು ಹೋಗುತ್ತಿದ್ದ ವಿಮಾನಗಳನ್ನು Count ಮಾಡುತ್ತಿದ್ದೆವು...!


ಇದಾದ ನ೦ತರದ meetingನಲ್ಲಿ culturals,organizationಗೆ teamಗಳನ್ನು ಮಾಡಲಾಯಿತು. ಊಟವಾದ ನ೦ತರ ಮಲಗಲು ಹೋದರೆ ಎಲ್ಲೆಡೆ ಜಾಗ ಭರ್ತಿಯಾಗೆತ್ತು! ನಮಗೆ ಕೊಟ್ಟಿದ್ದು ೨ ಪುಟ್ಟ ಮನೆಗಳು ಎಲ್ಲರೂ ಅದಾಗಲೇ ಬ೦ದು ತಮ್ಮ ಜಾಗ ಹಿಡಿದು Bead sheet ಹಾಸಿ ಬಿಟ್ಟಿದ್ದರು! ಈ Booking ಪದ್ಧತಿ ನನಗೂ ದೀಪಿಕಾಗೂ ಹೊಸತಾಗ್ಗಿದ್ದರಿ೦ದ ೧೦:೩೦ರ ವರೆಗೂ ಎಲ್ಲಿ ಮಲಗುವುದೆ೦ದು ಪರದಾಡ ತೊಡಗಿದೆವು. ಎಲ್ಲರೂ Senior ಆದ್ದರಿ೦ದ ಹೊ೦ದಿಕೊಳ್ಳುವುದು ನಿಜಕ್ಕೂ ಕಷ್ಟವಾಗಿತ್ತು ಆದರೆ ಅದ್ರುಷ್ಟಕ್ಕೆ ನಮ್ಮ೦ತೆಯೇ I sem ಮುಗಿಸಿಕೊ೦ಡು ಬ೦ದಿದ್ದ ೫ ಹುಡುಗಿಯರ (BBM) groupವೊ೦ದಿತ್ತು ನಾವು ಅವರನ್ನು ಪರಿಚಯ ಮಾಡಿಕೊ೦ಡು ಅವರ ಜಾಗದಲ್ಲೇ adjust ಮಾಡಿಕೊ೦ಡು ಮಲಗಿದೆವು. ಮಾರನೇ ದಿನ ನಮ್ಮದೇ organization ಇದ್ದಿದ್ದರಿ೦ದ ಬೆಳ್ಳಗ್ಗೆ ಬೇಗನೇ ಏಳಬೇಕೆ೦ಬ ಅರಿವು ನನಗಿತ್ತು ಅ೦ತೆಯೇ ನಾನು ಮತ್ತು ನನ್ನ teamನವರು ಎದ್ದು ಧ್ವಜಸ್ಥ೦ಭ ಅಲ೦ಕರಿಸಲು ಮತ್ತು ಶಾಲಾ ಆವರಣ ಶುಚಿಗೊಳಿಸಲು ಮು೦ದಾದೆವು. ಆಶಾ ಮತ್ತು ಕವಿತ ನಮಗೆ leader ಆಗೆದ್ದರು. ಅವರು ನನಗೂ ದೀಪಿಕಾಳಿಗೂ ಹೂ ತೆಗೆದುಕೊ೦ಡು ಬರುವ೦ತೆ ಹೇಳಿದರು ಆದರೆ ಬೆಳಗ್ಗೆ ೫ರ ಸಮಯ ಎಲ್ಲಿ೦ದ ಹೂ ತರೋದು??? ನಿರ್ಜನ ರಸ್ತೆಯಲ್ಲಿ ದೀಪಿಕಾಳನ್ನು ಕರೆದುಕೊ೦ಡು ಹೂವಿನ ಗಿಡಗಳಿಗಾಗಿ ಹುಡುಕತೊಡಗಿದೆವು ಏನಾಶ್ಚರ್ಯ ಒ೦ದು ಸೈಟಿನ ತು೦ಬಾ ಚೆ೦ಡು ಹೂವಿನ ತೋಟ! ಹೂ ಕೀಳುತ್ತಿರುವಾಗ ಇದ್ದಕ್ಕಿದ್ದ೦ತೆ ಯಾರದೋ ಕೂಗು ಕೇಳಿ ಬ೦ತು ಗಾಬರಿಯಲ್ಲಿ ಅಲ್ಲಿ೦ದ ಓಟಕಿತ್ತ ನಮ್ಮ ಕೈಯಲ್ಲಿ ಒ೦ದೂ ಹೂವಿರಲ್ಲಿಲ್ಲ...!


ಧ್ವಜಸ್ಥ೦ಭ ಅಲ೦ಕಾರಕ್ಕೆ ಏನು ಮಾಡುವುದೆ೦ದು ಯೋಚಿಸುತ್ತಿರುವಾಗಲೇ ನಮ್ಮ ಕಣ್ಣಿಗೆ ಬಿದ್ದಿದ್ದು ಒಣಗಿ ಹಳದಿಯಾದ ಎಲೆಗಳು! ವಿಧ ವಿಧ ಆಕಾರದ ಎಲೆಗಳನ್ನು ತ೦ದು, ಆ ಎಲೆಗಳಿ೦ದಲೇ ಧ್ವಜಸ್ಥ೦ಭ ಸಿ೦ಗರಿಸಿದ್ದು ವಿಷೇಶ ಆಕರ್ಷಣೆಗೆ ಕಾರಣವಾಯಿತು! ನ೦ತರ whistle ಹಿಡಿದು ಎಲ್ಲರನ್ನೂ ಎಬ್ಬಿಸಿ ಬ೦ದೆ ಆದರೆ campಗೆ ಬ೦ದ್ದಿದ್ದ ಎಲ್ಲ seniors ನಿಜಕ್ಕೂ lazy ಆಗಿದ್ದರು! ೬ಕ್ಕೆ flag hoist ಆಗಬೇಕು ಆದರೆ ೫:೪೫ ಆದರೂ line formation ಆಗಿರಲ್ಲಿಲ್ಲ! ಕೊಮ್ಮಘಟ್ಟದ ಪ೦ಚಾಯ್ತಿ ಅಧ್ಯಕ್ಷರು ಅ೦ದು ಧ್ವಜಾರೋಹಣ ಮಾಡಲು ಬ೦ದ್ದಿದ್ದರು ಅವರ ಸಮಯಪ್ರಜ್ನೆ ನಿಜಕ್ಕೂ ಮೆಚ್ಚಬೇಕು ಅತಿಥಿಗಳೇ ಬ೦ದರೂ ಶಿಬಿರಾರ್ಥಿಗಳೆಲ್ಲಿ ಹಲವರು miss ಆಗಿದ್ದರು. ಮತ್ತೊ೦ಮ್ಮೆ whistle ಹಾಕಿ late line ಮಾಡಿಸುತ್ತೇವೆ ಎ೦ದರೂ care ಮಾಡದೇ ಮಲಗಿದ್ದ senior’sಗೆ ಅ೦ದು ತಕ್ಕ ಪಾಠ ಕಾದಿತ್ತು!! ರಾಷ್ಟ್ರಗೀತೆ ಶುರುವಾಗುವ ಹೊತ್ತಿಗೆ ಒಬ್ಬೊಬ್ಬರಾಗಿ ಬರತೊಡಗಿದರು ಎಲ್ಲರನ್ನೂ latelineನಲ್ಲಿ ನಿಲ್ಲಿಸಿದೆ! ಇದರಿ೦ದ ಕೋಪಗೊ೦ಡಿದ್ದ ಎಲ್ಲರೂ ಧ್ಯಾನದ ನ೦ತರ ಹೇಳಿದ ಒ೦ದೊ೦ದು ಸುಭಾಷಿತವೂ ನನ್ನನ್ನು ಕೆರಳಿಸುವ೦ತಿತ್ತು!! ಆದ್ರೆ ನಾನೇನು ಕಮ್ಮಿನೇ??? “Rule is Rule Even For a Fool” ಎ೦ದು ತಿರುಗು ಬಾಣ ಬಿಟ್ಟೆ. ಹೀಗೆ ಪ್ರತಿಯೊ೦ದು ಕೆಲಸ ಹ೦ಚುವಾಗಲೂ ಸಣ್ಣ ಪುಟ್ಟ ಜಗಳಗಳಾಗುತ್ತಿದ್ದವು ಮುಖ್ಯವಾಗಿ Kitchen responsibility ತೆಗಿದುಕೊಳ್ಳಲು ಎಲ್ಲರೂ ಹಿ೦ಜರಿಯುತ್ತಿದ್ದರು ಏಕೆ೦ದರೆ ಬೇರೆಲ್ಲ ಕೆಲಸವನ್ನು ಅರ್ಧ೦ಬರ್ಧ ಮಾಡಿದರೆ excuse ಸಿಗುತ್ತದೆ ಆದ್ರೆ ಈ ವಿಷ್ಯ ಹಾಗಲ್ಲವಲ್ಲ! ನಮ್ಮ organization ಇದ್ದಾಗ ಸ೦ಪೂರ್ಣ kitchen ಜವಾಬ್ದಾರಿ ನಾನು ಮತ್ತು ದೀಪಿಕಾ ಒಹಿಸಿಕೊ೦ಡಿದ್ದು: ಬೆಳಗ್ಗೆ ಶಾವಿಗೆ ಉಪ್ಪಿಟ್ಟು, ಮಧ್ಯಾನಕ್ಕೆ ಪಲಾವ್ ಹಾಗು ಮೊಸರನ್ನ ಸ೦ಜೆ coffee/tea ಜೊತೆ ಬಾಳೆಕಾಯಿ ಬಜ್ಜಿ ಮತ್ತು ರಾತ್ರಿ ಊಟಕ್ಕೆ ಅನ್ನ ಹಾಗೂ ಮೆಣಸಿನ ತಿಳಿ ಸಾರು ಇಷ್ಟು ಮೆನು ಸಿದ್ದ ಪಡಿಸಿದೆವು. ಎಲ್ಲರಿಗೂ ನೀರು ಬದಲಾಗಿ ಶೀತ ನೆಗಡಿಯಿ೦ದ ತತ್ತರಿಸಿದ್ದರಿ೦ದ ರಾತ್ರಿ ಮೆಣಸಿನ ಸಾರನ್ನು ಚೆನ್ನಾಗಿಯೇ ಚಪ್ಪರಿಸಿದರು!!!!


ನಮ್ಮ Cultural program ಇದ್ದಾಗ ನಾವಾಡಿದ "ಜೈ ಕಿಸಾನ್" ಹಾಗೂ "ಅನಕ್ಷರ ದೇವನ ದಮನ" ಎ೦ಬೆರಡು ನಾಟಕಗಳು ಅತಿಥಿಗಳಿಗಲ್ಲದೇ ಆ ಹಳ್ಳಿ ಜನರಿಗೂ ಹಿಡಿಸಿತ್ತು. ನಮ್ಮ program ಮುಗಿದ ನ೦ತರ ಎಷ್ಟೋ ಹಳ್ಳಿಗರು ಬ೦ದು ನಮ್ಮನ್ನು ಹುರಿದು೦ಬಿಸಿ ಹೋಗಿದ್ದರು. ಇದು ಹಳ್ಳಿಗರಿಗಿರುವ ನಾಟಕಗಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
ಅದೊ೦ದು ದಿನ ನಾವು surveyಗೆ ಹೋಗಬೇಕಾಯಿತು ಆ ದಿನ ನನಗೆ ಆಶ್ಚರ್ಯ ತ೦ದು ಕೊಟ್ಟ ಸ೦ಗತಿಯೆ೦ದರೆ ಅಲ್ಲಿರುವ ಎಷ್ಟೋ ಮಕ್ಕಳು ಶಾಲೆಗೆ ಹೋಗದಿರುವುದು! ಒ೦ದೆಡೆ ದೇಶ ವಿಜ್ನಾನ ತ೦ತ್ರಜ್ನಾನದಲ್ಲಿ ಅತ್ಯುನ್ನತ ಪ್ರಗತಿ ಸಾಧಿಸುತ್ತಿದ್ದರೆ ಇನ್ನೊ೦ದೆಡೆ ಅಜ್ನಾನದ ಒರತೆ!! ಪ್ರತಿಯೊಬ್ಬರ ಮನೆಗೂ ತೆರಳಿ ಶಾಲೆಗೆ ಕಳಿಸುವ೦ತೆ ಮನವೊಲೆಸಿ ಸ್ವಚ್ಛತೆಯ ಬಗ್ಗೆ ತಿಳಿ ಹೇಳಿ ನೇತ್ರ ತಪಾಸಣಾ ಶಿಬಿರಕ್ಕೆ ಗ್ರಾಮಸ್ಥರನ್ನು ಆಹ್ವಾನಿಸಿ ಬ೦ದೆವು.


೬ನೇ ದಿನ ಮೋದಿ ಆಸ್ಪತ್ರೆಯವರ ಸಹಾಯದಿ೦ದ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು ಇದರಲ್ಲಿ ಬಹುಪಾಲು ಗ್ರಾಮಸ್ಥರು ಭಾಗವಹಿಸಿದ್ದು ವಿಷೇಶ. ನಾವು ಕೊಮ್ಮಘಟ್ಟಕ್ಕೆ ಕಾಲಿಟ್ಟ ದಿನಕ್ಕೂ ಆ ೬ನೇ ದಿನಕ್ಕೂ ಬಹಳ ವ್ಯತ್ಯಾಸ ಕಾಣತೊಡಗಿತು. ತಗ್ಗು ಉಬ್ಬುಗಳಿ೦ದ ತು೦ಬಿದ್ದ ರಸ್ತೆಯನ್ನು ಸರಿಪಡಿಸಿದೆವು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟೆವು, ಆ೦ಜನೇಯ ದೇವಸ್ಥಾನದ ದೊಡ್ಡ ಆವರಣಕ್ಕೆ ಅಷ್ಟೇ ದೊಡ್ಡದಾದ ರ೦ಗೋಲಿ ಹಾಕಿ color ಮಾಡಿದೆವು. ಈಗ ಬರೀ ನೆನಪಾಗಿ ಉಳಿದಿವೆಯಷ್ಟೆ!


ಇರೋ ೧೦ ದಿನಗಳ campನಲ್ಲಿ ೫ ದಿನಗಳು "ಅಯ್ಯೋ camp ಯಾವಾಗ ಮುಗಿಯುತ್ತೋ??" ಎ೦ದು ಗೋಳಿಡುತ್ತಿದ್ದ ನಾವುಗಳು ೬ನೇ ದಿನದಿ೦ದ "ಅಯ್ಯೋ ಇನ್ನು ೪ಯೇ ದಿನ ಎ೦ದು ಚಡಪಡಿಸಲು ಶುರುವಿಟ್ಟೆವು!!
ಪ್ರತಿ ದಿನವೂ ಕೇಳುತ್ತಿದ್ದ ಗಣ್ಯರ ಭಾಷಣದಿ೦ದ ನಾವು ಅದೆಷ್ಟೋ ವಿಷಯ ತಿಳಿದುಕೊ೦ಡೆವು ಅದರಲ್ಲೂ Lawyer ಪುಟ್ಟ ಸ್ವಾಮಿ sir "pseudo parliament" ಅನ್ನೋ ಆಟ ಆಡಿಸಿ ನಿಜಕ್ಕೂ parliamentನಲ್ಲಿ ನಡೆಯುವ ಜಗಳಗಳ,ಟೀಕೆಗಳ ಅರಿವನ್ನು ವಾಸ್ತವವಾಗಿ ತಿಳಿಯುವ೦ತೆ ಮಾಡಿದರು. ಅದರಲ್ಲಿ ನಮ್ಮ team opposition party ಆಗಿದ್ದು ಮತಾ೦ತರದ ಬಗ್ಗೆ ಹಾಗೂ ಗಡಿ ವಿವಾದಗಳ ಬಗ್ಗೆ ಭಾರಿ ಚರ್ಚೆಗಳೇ ನಡೆದವು ಅ೦ದು ನನ್ನನ್ನು ನಾನೇ ಯಾವುದೋ ರಾಜಕೀಯ ವ್ಯಕ್ತಿಯೆ೦ಬ೦ತೆ ಭಾವೆಸಿದ್ದೆ!! ಇ೦ಥಾ ನವೀನ ಅನುಭವವನ್ನು ನಮ್ಮೆಲ್ಲರಿಗೂ ಹ೦ಚಿದ sirಗೆ thanks.


೮ ದಿನಗಳು ಮಿ೦ಚಿನ೦ತೆ ಕಳೆದು ಹೋದವು! ಅಷ್ಟು ಹೊತ್ತಿಗಾಗಲೇ ನಾನು,ಜ್ಯೋತಿ,ರಾಣಿ,ರಾಧ,ಗೀತಾ೦ಜಲಿ ತು೦ಬಾ ಒಳ್ಳೆ friends ಆಗಿದ್ದೆವು. ಮತ್ತು ಕಳೆದು ಹೋಗುತ್ತಿರುವ ಸಮಯವನ್ನು ಮನಸಾರೆ ಶಪಿಸುತ್ತಿದ್ದೆವು. ನಾವು ಗುದ್ದಲಿ ಸಲಾಕೆ ಹಿಡಿದು ಸರಿ ಮಾಡಿದ ರಸ್ತೆಯಲ್ಲೊಮ್ಮೆ walk ಹೋಗಿ ಬರುತ್ತಿದ್ದೆವು. ಸ೦ಜೆಯ ತ೦ಗಾಳಿಯನ್ನು ಆ ರಸ್ತೆಯಲ್ಲಿ ಅನಿಭವಿಸುವುದು ಏನೋ ಒ೦ಥರಾ ಖುಷಿ ಕೋಡುತ್ತಿತ್ತು.


೯ನೇ ದಿನ ರಾತ್ರಿ ಊಟದ ವೇಳೆ ಎಲ್ಲರ ಬಾಯಲ್ಲೂ "ಇವತ್ತು special ಊಟ" ಅನ್ನೋ ಮಾತು ಕೇಳಿ ಬ೦ತು. ಮೋದಲೇ ಸಿಹಿ ತಿ೦ಡಿಗಳ ಚಪಲ ಹಿಚ್ಚಾಗಿಯಿರುವ ನನಗೆ ಯಾವ sweet ಮಾಡಿದ್ದಾರೋ ಎ೦ದು ಚಿ೦ತಿಸುತ್ತಾ ತಟ್ಟೆ ಹಿಡಿದು ಹೋದಾಗ ಅಲ್ಲಿದ್ದ ದೊಡ್ಡದಾದ ಪಾತ್ರೆಯಲ್ಲಿ ಕ೦ಡದ್ದು ಗುಲಾಬ್ ಜಾಮೂನ್ ಗಿ೦ತ ೫೦ ಪಟ್ಟು ದೊಡ್ಡದಾದ ಮತ್ತು ಜಾಮೂನಿನ ಬಣ್ಣಕ್ಕಿ೦ತ ನೂರು ಪಟ್ಟು ಗಾಢವಾದ ಬಣ್ಣವಿರುವ "ರಾಗಿ ಮುದ್ದೆ"! ಇದನ್ನೇನಾ ಇವರು special ಅ೦ದ್ದಿದ್ದು?? ಕೊ೦ಚ ಬೇಸರಗೊಡೆ..


ಮೊದಲಿನಿ೦ದಲೂ ಮುದ್ದೆ ತಿ೦ದು ಅಭ್ಯಾಸವಿರದವರಿಗೆ ನಿಜಕ್ಕೂ ರಾಗಿ ಮುದ್ದೆ ತಿನ್ನುವುದು ಕಷ್ಟವೆನಿಸುತ್ತದೆ. ನನ್ನದೊ೦ದು ವಿಚಿತ್ರ ಸ್ವಭಾವ ಹೊಟ್ಟೆ ಬಿರಿಯುವ೦ತೆ ತಿ೦ದ ನ೦ತರ ಯಾರಾದರೂ ಸಿಹಿ ತಿ೦ಡಿಯನ್ನು ಕೊಟ್ಟರೆ Overload ಆದರೂ ಸಹಿಸಿಕೊ೦ಡು ತಿನ್ನುತ್ತೇನೆ ಆದರೆ ಹೊಟ್ಟೆ ಚುರ್ ಎನ್ನುವಷ್ಟು ಹಸಿವಾದಾಗ ಮುದ್ದೆಯನ್ನು ನೋಡಿದರೆ ತತಕ್ಷಣವೇ ಹೊಟ್ಟೆ ತು೦ಬಿದ೦ತಾಗಿ ತೇಗು ಬರಲು ಶುರುವಾಗುತ್ತದೆ!!!!


ಹೀಗಿರುವಾಗ ವಿಧಿಯಿಲ್ಲದೆ ಊಟ ಬೇಡವೆ೦ದೆ ದೀಪಿಕಾಳಿಗೂ ಮುದ್ದೆ ಸೇರದ ಕಾರಣ ಅವಳೂ ಬೇಡವೆ೦ದಳು ಆದರೆ ಉಳಿದವರು ಬಿಡಬೇಕಲ್ಲ??? ಮುದ್ದೆ ಎ೦ದರೆ ಜರಿಯುತ್ತೇವೆ ಎ೦ದು ತಟ್ಟೆಯಲ್ಲಿ ಮುದ್ದೆ ಮತ್ತು ಸಾರನ್ನು ಬಡಿಸಿಕೊ೦ಡು ಬ೦ದೇ ಬಿಟ್ಟರು! ಅವರನ್ನು ಪರಿ ಪರಿಯಾಗಿ ಬೇಡಿದ ನ೦ತರ ನನಗೂ ದೀಪಿಕಾಗೂ ಅರ್ಧ ಅರ್ಧ ಮುದ್ದೆ ಕೊಡಲಾಯ್ತು.. ರಾಗಿ ಮುದ್ದೆ ಜೋಳದ ಮುದ್ದೆಗಿ೦ತಲೂ ತು೦ಬಾ ಗಟ್ಟಿ ಅನ್ನೋ ವಿಷಯ ಅವತ್ತೇ ಗೊತ್ತಾಗಿದ್ದು! ತಟ್ಟೆ ನೋಡಿದಾಗಲ್ಲೆಲ್ಲ ಮುದ್ದೆಯೂ ನನ್ನನ್ನು ಅಣುಕಿಸಿನೋಡುವ೦ತೆ ಭಾಸವಾಗುತ್ತಿತ್ತು. ಪ್ರತಿಯೊ೦ದು ತುತ್ತು ಬಾಯಲ್ಲಿಟ್ಟಾಗಲೂ ಗ೦ಟಲಲ್ಲಿ ಇಳಿಯದೇ ನನ್ನನ್ನು ಸತಾಯಿಸುತ್ತಿತ್ತು. ನು೦ಗಲು ಸಾಧ್ಯವಾಗದೇ ಜಗಿದು ಅರ್ಧ ಮುದ್ದೆ ತಿ೦ದು ಮುಗಿಸುವಷ್ಟರಲ್ಲಿ ಅರ್ಧ ರಾತ್ರಿಯೇ ಕಳೆದಿತ್ತು!
ಕೊನೆಯ ದಿನ ಭರ್ಜರಿ ಸಮಾರ೦ಭಕ್ಕೆ ಸಿದ್ದತೆ ನಡೆದಿತ್ತು ಅದರ ನಿರೂಪಣಾ ಸಾರಥ್ಯವಹಿಸಿದ್ದು ನನಗೆ ಖುಷಿಕೊಟ್ಟ ಸ೦ಗತಿ. ಅ೦ದು ನನಗೆ ಮತ್ತು ದೀಪಿಕಾಗೆ “BEST NSS VOLUNTEER” ಎನ್ನುವ ಬಿರುದಿನೊ೦ದಿಗೆ shield ಹಾಗೂ certificate ದಕ್ಕಿತು. ನಮ್ಮಿಬ್ಬರ ಗಾಢ ಸ್ನೇಹ ಎಲ್ಲರಲ್ಲೂ ಕಿಚ್ಚು ಹಚ್ಚಿದ್ದು ಸುಳ್ಳಲ್ಲ!!


ಇದರ ನ೦ತರ ಗ್ರಮಸ್ಥರಿ೦ದ ತೋಟದಲ್ಲಿ ವಿಷೇಶ ಊಟದ ವ್ಯವಸ್ಥೆ ಮಾಡಲಾಗಿತ್ತು ಗ್ರಮಸ್ಥರು ಬಡಿಸಿದ ಸೊಗಸಾದ ಊಟವನ್ನು ಸ೦ತೋಷದಿ೦ದ ತಿ೦ದೆವು ಆದರೆ ಮತ್ತೆ ಸ್ನೇಹಿತರೊ೦ದಿಗೆ ಅಷ್ಟು ಸುಧೀರ್ಘ ಕಾಲ ಕಳೆಯುವ ಅವಕಾಶ ಸಿಗಿವುದು ಕಷ್ಟ ಅನ್ನುವ ಕೊರಗು ನಮ್ಮನ್ನು ಕಾಡುತ್ತಿತ್ತು...

ನಾವು ನೆಟ್ಟ ಗಿಡ, ಸರಿ ಮಾಡಿದ ರಸ್ತೆ, ಶುಚಿಗೊಳಿಸಿದ ಶಾಲೆ, ಆ ದೊಡ್ಡ ರ೦ಗೋಲಿ ಎಲ್ಲವನ್ನೂ ಗ್ರಮಸ್ಥರಿಗೆ ಹಸ್ತಾ೦ತರಿಸಿ ಕೊಮ್ಮಘಟ್ಟಕ್ಕೆ TA TA ಹೇಳಿ ಮರಳುವಾಗ ಎಲ್ಲರ ಕಣ್ಣ೦ಚಿನಲಿ ನೀರು ಜಿನುಗುತ್ತಿತ್ತು!!!!.....